Advocate

Advocate

Wednesday, January 15, 2020

ಪೌರತ್ವ ಒಂದು ಅವಲೋಕನ....




ಇಡೀ ದೇಶ ಬೆಂಕಿಯಲ್ಲಿ ಬೇಯುತ್ತಿದೆ. ಇತ್ತೀಚಿನ ಒಂದು ಕಾನೂನಿನ ತಿದ್ದುಪಡಿ ದೇಶದಲ್ಲಿ ಕಿಚ್ಚು ಹಚ್ಚಿದೆ. ತಿದ್ದುಪಡಿ ಕಾಯ್ದೆಯ ಪರ ಹಾಗೂ ವಿರೋಧದ ಚಳುವಳಿಗಳು ದೇಶದ ಸಾಮಾನ್ಯ ಜನರನ್ನು ದಿಕ್ಕುತಪ್ಪಿಸುತ್ತಿವೆ. ಮುಸ್ಲಿಂ ಪರ ಹಾಗೂ ವಿರೋಧ ಹೋರಾಟವನ್ನು ರಾಜಕೀಯ ಪಕ್ಷಗಳು ಪೋಷಿಸಿಕೊಂಡು ಹೋಗುತ್ತಿವೆ. ಕೇಂದ್ರ ಸರ್ಕಾರ ದೇಶದ ಮುಸ್ಲಿಮರಿಗೆ ಯಾವುದೇ ತೊಂದರೆಯನ್ನು ಉಂಟು ಮಾಡುವುದಿಲ್ಲ ಎಂಬಿತ್ಯಾದಿ ಸಮಜಾಯಿಷಿ ನೀಡಿದರೂ ಕೂಡ ಚಳುವಳಿ ತೀವ್ರವಾಗುತ್ತಿದೆ. ಹಾಗಾಗಿ ದೇಶದ ಸಂವಿದಾನವನ್ನು ಅರಿಯುವ ಹಾಗೂ ತಿದ್ದುಪಡಿ ಕಾಯ್ದೆಯ ಕುರಿತು ಚರ್ಚೆಗಳಾಗದ ಹೊರತು ಚಳುವಳಿಗೆ ತಾರ್ಕಿಕ ಅಂತ್ಯ ಕಾಣಿಸುವುದು ಕಷ್ಟ ಸಾಧ್ಯವಾಗಿದೆ. ಹಾಗೂ ಕೇಂದ್ರದ ಪೌರತ್ವ ತಿದ್ದುಪಡಿ ಕಾಯ್ದೆ 2019(ಸಿ..) ಹಾಗೂ ರಾಷ್ಟ್ರೀಯ ನಾಗರೀಕ ನೊಂದಣಿ (ಎನ್.ಆರ್.ಸಿ)ಯು ಜನವಿರೋಧಿಯೋ ಅಥವಾ ಜನಪರವೆನ್ನುವುದನ್ನು ಅರಿಯಲು ಸಾಧ್ಯ. 

ಪ್ರತೀ ದಿವಸ ನಾವು ಪತ್ರಿಕೆಗಳಲ್ಲಿಪೌರತ್ವಪದವನ್ನು ನೋಡುತ್ತಿದ್ದೇವೆ. ಹಾಗಾದರೆ ಪೌರತ್ವ ಎಂದರೆ ಏನು, ಒಂದು ದೇಶದ ಪೌರ ಅಂದರೆ ಆತನ ಹಕ್ಕು ಹಾಗೂ ಕರ್ತವ್ಯಗಳು ಏನು ಎಂಬುದನ್ನು ತಿಳಿಯಬೇಕಾಗುತ್ತೆ. ಸಾಮಾನ್ಯವಾಗಿ ಪೌರತ್ವ ಎಂದರೆ ಒಂದು ದೇಶದ ನಾಗರೀಕ ಸ್ಥಾನ ಅಥವಾ ಸ್ಥಿತಿ ಎಂದಾಗುತ್ತದೆ. ಪೌರತ್ವವನ್ನು ಕಾನೂನಾತ್ಮಕವಾಗಿ ನೋಡಿದಾಗ ಅದರ ವ್ಯಾಪ್ತಿ ವಿಸ್ತಾರಗೊಳ್ಳುತ್ತದೆ. ಪೌರತ್ವ ಎಂಬುದು ಒಂದು ದೇಶ ಹಾಗೂ ಒಬ್ಬ ವ್ಯಕ್ತಿಯ ಸಂಬಂಧವಾಗಿದ್ದು, ವ್ಯಕ್ತಿ ತನ್ನ ದೇಶಕ್ಕೆ ನಿಷ್ಠನಾಗಿರುವುದ್ದು ಅದರ ಬದಲಿಗೆ ತನ್ನ ಭದ್ರತೆಯನ್ನು ಪಡೆದುಕೊಳ್ಳುತ್ತಾನೆ.  ಪೌರತ್ವವು ಅಂತಹ ವ್ಯಕ್ತಿಗೆ ಸ್ವಾತಂತ್ರ್ಯದ ಸ್ಥಿತಿಯನ್ನು ನೀಡುವುದರ ಜೊತೆಗೆ ಕರ್ತವ್ಯಗಳನ್ನೂ ನೀಡುತ್ತದೆ. ಆದರೆ ಯಾರು ದೇಶದ ಪೌರನಾಗಿರದೇ ಯಾವ ದೇಶದಲ್ಲಿ ವಾಸಮಾಡುತ್ತಿರುತ್ತಾರೋ ಅವನಿಗೆ ಕೆಲವು ರೀತಿಯ ಹಕ್ಕು, ಕರ್ತವ್ಯ ಹಾಗೂ ಜವಾಬ್ದಾರಿಗಳನ್ನು ಪೌರತ್ವವು ನಿರ್ಬಂಧಿಸುತ್ತದೆ.

        ದೇಶದ ನಾಗರೀಕನಿಗೆ ಪೌರತ್ವದ ಮೂಲಕ ಸಂಪೂರ್ಣ ರಾಜಕೀಯದ ಹಕ್ಕು, ಮತದಾನ ಮಾಡುವ ಹಕ್ಕು ಮತ್ತು ಸಾರ್ವಜನಿಕವಾಗಿ ವ್ಯವಹಾರಗಳನ್ನು ನಡೆಸುವ ಹಕ್ಕನ್ನು ದಯಪಾಲಿಸಲಾಗುತ್ತದೆ. ನಾಗರೀಕನಾದವನು ಚುನಾವಣೆಯಲ್ಲಿ ಭಾಗವಹಿಸುವ, ಮತದಾನ ಮಾಡುವ ಹಾಗೂ ದೇಶವನ್ನು ಮುನ್ನಡೆಸುವ ಹಕ್ಕು ಪೌರತ್ವದ ಮೂಲಕವೇ ಪಡೆಯಬೇಕಾಗುತ್ತದೆ. ಪೌರತ್ವವಿಲ್ಲದೇ ಯಾರನ್ನೂ ದೇಶದ ನಾಗರೀಕನೆಂದು ಪರಿಗಣಿಸಲು ಸಾಧ್ಯವಿರುವುದಿಲ್ಲ. ಪೌರತ್ವ ಪಡೆದ ನಾಗರೀಕನು ದೇಶಕ್ಕೆ ನಿಷ್ಠೆ, ಕಂದಾಯ ಪಾವತಿ ಮಾಡುವ ಹಾಗೂ ಸೇನೆಯಲ್ಲಿ ಸೇವೆ ಮಾಡುವ ಜವಾಬ್ದಾರಿಯನ್ನು ಹೊಂದಿರುತ್ತಾನೆ.

ಪೌರತ್ವದ ಕಲ್ಪನೆಯು ಪುರಾತನ ಗ್ರೀಸ್ ನಗರ ಹಾಗೂ ನಗರ ರಾಜ್ಯಗಳಲ್ಲಿ ಹುಟ್ಟಿಕೊಂಡಿತು. ಮೊದಲಿಗೆ ಅಲ್ಲಿ ಚರ ಹಾಗೂ ಸ್ಥಿರ ಸ್ವತ್ತುಗಳನ್ನು ಹೊಂದಿರುವವರಿಗೆ ಮಾತ್ರ ಪೌರತ್ವವನ್ನು ನೀಡಲಾಗಿತ್ತು ಆದರೆ ಮಹಿಳೆಯರು, ಗುಲಾಮರು ಅಥವಾ ಸಮೂದಾಯಗಳ ಬಡಜನರಿಗೆ ಪೌರತ್ವನ್ನು ನಿರಾಕರಿಸಲಾಗಿತ್ತು. ಗ್ರೀಕ್ ನಗರ ರಾಜ್ಯಗಳಲ್ಲಿ ಪೌರತ್ವವು ಮತದಾನ ಮಾಡುವ ಹಾಗೂ ಕಂದಾಯಗಳನ್ನು ಪಾವತಿಸುವ ಹಾಗೂ ಸೇನೆಯಲ್ಲಿ ಸೇವೆ ಮಾಡುವ ಅವಕಾಶವನ್ನು ಕಲ್ಪಿಸಿತ್ತು. ಆನಂತರದಲ್ಲಿ ಆದ ಬೆಳವಣಿಗೆಯಲ್ಲಿ ಪೌರತ್ವದಲ್ಲಿ ಹಲವಾರು ಬದಲಾವಣೆಗಳಾಗಿದ್ದು ಕಾನೂನಿನ ಮೂಲಕ ವಿಶೇಷ ಅಧಿಕಾರಗಳನ್ನು ನೀಡಲಾಯಿತು. ಇನ್ನು ಇಂಗ್ಲೆಂಡಿನ ಪೌರತ್ವ ನೀಡಿಕೆಯ ಇತಿಹಾಸವನ್ನು ಪರಿಶೀಲಿಸುವುದಾದರೆ, ಇಂಗ್ಲೆಂಡಿನ ಪೌರತ್ವವನ್ನು ಪಡೆಯುವ ಮಾರ್ಗಗಳೆಂದರೆ, ದೇಶದ ನಿರ್ದಿಷ್ಟ ಭೂಭಾಗಲ್ಲಿ ಜನಿಸುವುದು, ನಾಗರೀಕನ ಪಿತೃಗಳಿಂದ ಪಡೆಯುವುದು, ನಾಗರೀಕನ ಮದುವೆ ಮತ್ತು ದೇಶೀಕರಣಗ. ಮೊದಲಿಗೆ ಇಂಗ್ಲೆಂಡಿನಲ್ಲಿ ಮಹಿಳೆಯರು ಹಾಗೂ ಆಕೆಯ ಮಕ್ಕಳ ಪೌರತ್ವವು ಆಕೆಯ ಗಂಡನ ಪೌರತ್ವವನ್ನು ಅವಲಂಬಿಸಿರುತ್ತಿತ್ತು. ಎರಡನೇ ಜಾಗತಿಕ ಯುದ್ದದ ಪರಿಣಾಮದಿಂದಾಗಿ ಹಾಗೂ 1920 ನಂತರದಲ್ಲಿ ಪುರುಷ ಹಾಗೂ ಮಹಿಳೆಯು ಸಮಾನರು ಎಂಬ ವಾದ ಏರ್ಪಟ್ಟಿದ್ದರಿಂದ ಪೌರತ್ವದ ವ್ಯವಸ್ಥೆಯನ್ನು ಬದಲಾವಣೆ ಮಾಡಿಕೊಂಡಿದ್ದು, ಮಹಿಳೆ ಹಾಗೂ ಮಕ್ಕಳಿಗೆ ಅವರ ಪೌರತ್ವವನ್ನು ಪಡೆಯುವ ಆಯ್ಕೆಯನ್ನು ಅವರಿಗೆ ನೀಡಲಾಗಿರುತ್ತದೆ.

ಡಾ.ಬಿ.ಆರ್.ಅಂಬೇಡ್ಕರ್ ರವರ ದೃಷ್ಟಿಕೋನದಲ್ಲಿ ಪೌರತ್ವ:
ಭಾರತದಲ್ಲಿ ಪೌರತ್ವನ್ನು ರೂಪಿಸುವಲ್ಲಿ ಶ್ರಮವಹಿಸಿದವರು ಡಾ.ಬಿ.ಆರ್.ಅಂಬೇಡ್ಕರ್ರವರು. ಅವರ ಬರಹಗಳು ಹಾಗೂ ಭಾಷಣಗಳಲ್ಲಿ ಪೌರತ್ವದ ಮಹತ್ವದ ಬಗ್ಗೆ ವಿವರಿಸುತ್ತಾ, ಪೌರತ್ವದಿಂದ ಹಲವಾರು ಪ್ರಯೋಜನಗಳನ್ನು ದೇಶದ ನಾಗರೀಕರಿಗೆ ನೀಡ ಬಯಸುತ್ತಾರೆ. ಅವರ ಪ್ರಕಾರ ಪೌರತ್ವ ಎಂದರೆ
ಪೌರತ್ವವು ಹಲವಾರು ಹಕ್ಕುಗಳ ಗೊಂಚಲಾಗಿರುತ್ತದೆ, ಅವುಗಳೆಂದರೆ 1) ವಯುಕ್ತಿಕ ಸ್ವಾತಂತ್ರ್ಯ, 2) ವಯುಕ್ತಿಕ ಭದ್ರತೆ, 3) ಖಾಸಗಿ ಸ್ವತ್ತುಗಳನ್ನು ಹೊಂದುವ ಹಕ್ಕು, 4) ಕಾನೂನಿನ ದೃಷ್ಟಿಯಲ್ಲಿ ಸಮಾನತೆ 5) ಆತ್ಮಸಾಕ್ಷಿಯ ಸ್ವಾತಂತ್ರ್ಯ 6) ಅಭಿವ್ಯಕ್ತಿ ಸ್ವಾತಂತ್ರ್ಯ 7) ಸಭೆ ಸೇರುವ ಹಕ್ಕು 8) ದೇಶದ ಸರ್ಕಾರದಲ್ಲಿ ಭಾಗವಹಿಸುವಿಕೆಯ ಹಕ್ಕು, 9) ರಾಜ್ಯದ ಅಡಿಯಲ್ಲಿ ವ್ಯವಹಾರ ನಡೆಸುವ ಹಕ್ಕು. ಸರ್ಕಾರದಲ್ಲಿ ಭಾಗವಹಿಸುವಿಕೆ ಹಾಗೂ ರಾಜ್ಯದಲ್ಲಿ ವ್ಯವಹಾರ ಮಾಡಬಹುದಾದ ಮುಖ್ಯವಾದ ಎರಡು ಹಕ್ಕುಗಳು ಪೌರತ್ವದಿಂದ ಲಭಿಸುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ”. ಭಾರತದಂತಹ ಪ್ರಜಾಪ್ರಭುತ್ವದ ಮಟ್ಟಿಗೆ ದೇಶದ ಸರ್ಕಾರದಲ್ಲಿ ಭಾಗವಹಿಸುವ ಮತ್ತು ಸರ್ಕಾರವನ್ನು ಪ್ರತಿನಿಧಿಸುವ ಹಕ್ಕು ಪೌರತ್ವದಿಂದಲೇ ಲಭಿಸುವಂತಹುದು.  

ಭಾರತೀಯ ಪೌರತ್ವ ಹಾಗೂ ಅದರ ಮಹತ್ವ:
ಭಾರತದಲ್ಲಿ ಪೌರತ್ವದ ಕುರಿತ ಚರ್ಚೆ ಮೊದಲಿಗೆ ಪ್ರಾರಂಭವಾಗಿದ್ದು, ಸಂವಿಧಾನದ ರಚನೆಯ ಕಾಲಘಟ್ಟದಲ್ಲಿ. ಡಾ.ಬಿ.ಆರ್.ಅಂಬೇಡ್ಕರರು ದೇಶದಲ್ಲಿನ ವಿವಿಧ ಧರ್ಮದ, ಜಾತಿಯ ಹಾಗೂ ಆರ್ಥಿಕ ಅಸಮಾನತೆಯ ಸಮಾಜವನ್ನು ಗಮನದಲ್ಲಿರಿಸಿಕೊಂಡು ಹಾಗೂ ಸ್ವತಂತ್ರ ಭಾರತ ಮುನ್ನಡೆಯಬೇಕಾದ ಹಾದಿಯನ್ನು ಸ್ಪಷ್ಟ ಪಡಿಸುತ್ತಾ, ಸಂವಿದಾನದಲ್ಲಿ ಭಾರತೀಯರಿಗೆ ಪೌರತ್ವ ನೀಡುವ ವ್ಯವಸ್ಥೆಯನ್ನು ಕಟ್ಟಿಕೊಡುತ್ತಾರೆ. ಭಾರತದ ಸಂವಿಧಾನದ ಭಾಗ-2 ರಲ್ಲಿನ 5 ರಿಂದ 11ನೇ ಅನುಚ್ಚೇದದಲ್ಲಿ ಯಾರು ಯಾರು ಭಾರತದ ಪೌರತ್ವವನ್ನು ಪಡೆಯಬಹುದು ಎಂಬುದನ್ನು ವಿವರಿಸಿದ್ದಾರೆ.

ಭಾರತದ ಸಂವಿದಾನದ 5ನೇ ಅನುಚ್ಚೇದದ ಮೂಲಕ ಸಂವಿಧಾನದ ಪ್ರಾರಂಭದಲ್ಲಿ ಹೇಗೆ ನಾಗರೀಕತ್ವವನ್ನು ಪಡೆಯಬಹುದು ಎಂಬುದನ್ನು ವಿವರಿಸಲಾಗಿದೆ. ಸಂವಿಧಾನದ ಪ್ರಾರಂಭದ ದಿವಸಗಳಲ್ಲಿ ಯಾರು ಭಾರತದ ರಾಜ್ಯಕ್ಷೇತ್ರದಲ್ಲಿ ) ಹುಟ್ಟಿರುವವರು, ಬಿ) ತನ್ನ ತಾಯಿಯಾಗಲೀ, ತಂದೆಯಾಗಲೀ ಭಾರತದ ರಾಜ್ಯಕ್ಷೇತ್ರದಲ್ಲಿ ಹುಟ್ಟಿದ್ದರೆ ಹಾಗೂ ಸಿ) ಸಂವಿಧಾನದ ಪ್ರಾರಂಭಕ್ಕೆ ನಿಕಟಪೂರ್ವದಲ್ಲಿ ಐದು ವರ್ಷಗಳಿಗೆ ಕಡಿಮೆ ಇಲ್ಲದಷ್ಟು ಕಾಲದಿಂದ ಭಾರತದ ರಾಜ್ಯಕ್ಷೇತ್ರದಲ್ಲಿ ಸಾಮಾನ್ಯ ನಿವಾಸಿಯಾರುವ ಪ್ರತಿಯೊಬ್ಬ ವ್ಯಕ್ತಿಯೂ ಭಾರತದ ನಾಗರೀಕ ಎಂದು ಪರಿಗಣಿಸುತ್ತದೆ. ಆದರೆ ಎಲ್ಲಿಯೂ ಕೂಡ ಪೌರತ್ವವನ್ನು ಅನುಚ್ಚೇದದಡಿಯಲ್ಲಿ ಜಾತಿ ಧರ್ಮದ ಆಧಾರದಲ್ಲಿ ಪಡೆಯಬಹುದು ಎಂಬುದನ್ನು ವಿವರಿಸುವುದಿಲ್ಲ. ಬದಲಿಗೆ ಯಾರು ಯಾರು ದೇಶದಲ್ಲಿ ಹುಟ್ಟಿರುತ್ತಾರೋ, ಯಾರ ಪೂರ್ವಜರು ದೇಶದಲ್ಲಿ ಹುಟ್ಟಿರುತ್ತಾರೋ ಹಾಗೂ ಸಂವಿಧಾನ ಜಾರಿಗೆ ಬರುವ 5 ವರ್ಷಗಳಿಗೆ ಮುಂಚೆ ಯಾರು ಭಾರತಕ್ಕೆ ವಾಸಿಸುತ್ತಿರುತ್ತಾರೋ ಅಂತಹವರು ಎಲ್ಲರೂ ದೇಶದ ಪೌರರಾಗಿರುತ್ತಾರೆ.

ಇತ್ತೀಚಿಗಿನ ಬೆಳವಣಿಗೆಯೆಂದರೆ ಹಿಂದೂ ಧರ್ಮದ ಅನುಯಾಯಿಗಳು ದೇಶದ ಮೂಲನಿವಾಸಿಗಳು ಹಾಗೂ ಮುಸ್ಲಿಮರ ವಲಸೆ ಬಂದವರು ಎಂಬುದನ್ನು ಜನರಲ್ಲಿ ಬಿತ್ತುತ್ತಿದ್ದಾರೆ. ಭಾರತದ ವಿಭಜನೆಗೆ ಮೊದಲಿನಿಂದಲೂ ಮುಸ್ಲಿಮರು ಭಾರತಲ್ಲಿ ಹುಟ್ಟಿದವರೇ ಹಾಗೂ ಅವರೂ ಸಹ ದೇಶದ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದ್ದವರೇ. ರಾಜಕೀಯ ಕಾರಣಗಳಿಗಾಗಿ ಭಾರತ ಹಾಗೂ ಪಾಕಿಸ್ಥಾನಗಳ ದೇಶಗಳ ವಿಭಜನೆಯಾದಾಗ ಸುಮಾರಷ್ಟು ಮುಸ್ಲಿಮರು ಪಾಕಿಸ್ಥಾನಕ್ಕೆ ವಲಸೆ ಹೋಗಿದ್ದಾರೆ ಹಾಗೂ ಅಲ್ಲಿಂದ ಹಿಂದೂಗಳೂ ಭಾರತದ ಭೂಬಾಗಕ್ಕೆ ಬಂದಿದ್ದಾರೆ. ಹಾಗೂ ಭಾರತದಲ್ಲಿರುವ ಮುಸ್ಲಿಮರು ಪಾಕಿಸ್ಥಾನಕ್ಕೆ ಹೋಗದೇ ನೆಲದಲ್ಲಿ ಅವರ ನೆನಪನ್ನು ಬಿಟ್ಟುಹೋಗಲಾಗದೇ ದೇಶದಲ್ಲಿಯೇ ಉಳಿದುಕೊಂಡವರೇ ಹೊರತು ಪಾಕಿಸ್ಥಾನದಿಂದ ಬಂದವರಲ್ಲ. ಪಾಕಿಸ್ಥಾನದ ರಚನೆಯಾದಾಗ ಭಾರತಕ್ಕೆ ವಲಸೆ ಬಂದವರಿಗೂ ಸಹ ದೇಶದ ಪೌರತ್ವ ನೀಡಬೇಕಾದ ಮಹತ್ವವನ್ನು ಅರಿತು ಸಂವಿಧಾನದ ಅನುಚ್ಚೇದ 6 ರಲ್ಲಿ ರೀತಿ ವಿವರಿಸುತ್ತಾರೆ. ಪಾಕಿಸ್ಥಾನದಿಂದ ಭಾರತ ರಾಜ್ಯಕ್ಷೇತ್ರಕ್ಕೆ ಯಾರೇ ವಲಸೆ ಬಂದಿದ್ದರೂ ಸಹ ) ಅವನಾಗಲೀ, ಅವನ ತಾಯಿ ಅಥವಾ ತಂದೆಯಾಗಲೀ ಅಥವಾ ಅಜ್ಜಿ ಅಥವಾ ತಾತನಾಗಲೀ ಭಾರತ ಸರ್ಕಾರದ ಅಧಿನಿಯಮ 1935 ರಲ್ಲಿ ಪರಿಭಾಷಿಸುವಂತೆ ಭಾರತದಲ್ಲಿ ಹುಟ್ಟಿದ್ದರೇ, ಬಿ) 1) ಅಂತಹ ವ್ಯಕ್ತಿಯು 1948ನೆಯ ಇಸವಿ ಜುಲೈ ತಿಂಗಳ ಹತ್ತೊಂಬತ್ತನೇ ದಿನಾಂಕಕ್ಕಿಂತ ಮುಂಚಿತವಾಗಿ ವಲಸೆ ಬಂದು ದೇಶದಲ್ಲಿ ಸಾಮಾನ್ಯ ನಿವಾಸಿಯಾಗಿದ್ದರೆ, 2)ದಿನಾಂಕ: 19.7.1948ರಂದು ಅಥವಾ ತರುವಾಯ ಭಾರತಕ್ಕೆ ವಲಸೆ ಬಂದಿದ್ದು, ಭಾರತದ ನಾಗರೀಕನೆಂದು ನೊಂದಾಯಿಸಿಕೊಂಡಿದ್ದರೆ, ಆತನೂ ಸಹ ಸಂವಿಧಾನ ಜಾರಿಯಾದಂದಿನಿಂದಲೂ ಭಾರತದ ನಾಗರೀಕನಾಗಿರುತ್ತಾರೆ. ಭಾರತದ ಸಂವಿಧಾನವು ಪಾಕಿಸ್ಥಾನದಿಂದ ವಲಸೆ ಬಂದಿರುವ ಎಲ್ಲಾ ಧರ್ಮೀಯರಿಗೂ ಸಹ ದೇಶದ ನಾಗರೀಕ ಎಂಬುದಾಗಿ ತೀರ್ಮಾನಿಸುತ್ತದೆ. ಹಾಗಾಗಿ ಸಂವಿಧಾನವು ಪಾಕಿಸ್ಥಾನದಿಂದ ಬಂದಿರುವ ಯಾರಿಗೂ ಸಹ ಪೌರತ್ವವನ್ನು ನಿರಾಕರಿಸುವುದಿಲ್ಲ. ಪಾಕಿಸ್ಥಾನದಿಂದ ಬಂದವರು ದೇಶದ ನಾಗರೀಕರಲ್ಲ ಎಂಬುದು ಸಂವಿಧಾನ ವಿರೋಧಿ ಹೇಳಿಕೆಯಾಗಿರುತ್ತದೆ.

ಅಲ್ಲದೇ ಭಾರತದಿಂದ ಹೊರಗೆ ವಾಸಿಸುತ್ತಿರುವ ಅನಿವಾಸಿ ಭಾರತೀಯರೂ ಸಹ ಭಾರತ ಸರ್ಕಾರ ಅಧಿನಿಯಮ 1935ರಲ್ಲಿ ವಿವರಿಸುವಂತೆ ಭಾರತದ ನಿವಾಸಿ ಎಂದು ನೊಂದಣಿ ಮಾಡಿಕೊಂಡಿದ್ದರೂ ಸಹ ಅಂತಹವರಿಗೂ ನಮ್ಮ ಸಂವಿಧಾನ ಅನುಚ್ಚೇದ 8ರಡಿಯಲ್ಲಿ ಭಾರತದ ಪೌರ ಎಂದು ಭಾವಿಸುತ್ತದೆ. ಆದರೆ ಯಾವುದೇ ವ್ಯಕ್ತಿ ತನ್ನ ಸ್ವಯಿಚ್ಚೆಯಿಂದ ಯಾವುದೇ ವಿದೇಶಿ ರಾಜ್ಯದ ನಾಗರೀಕತ್ವವನ್ನು ಪಡೆದಿದ್ದರೆ ಅಂತಹ ವ್ಯಕ್ತಿಗೆ ಅನುಚ್ಚೇಧ 5, 6, ಹಾಗೂ 8 ರಂತೆ ಪೌರತ್ವವನ್ನು ನೀಡದೇ ಆತ ಭಾರತದ ನಾಗರೀಕನಲ್ಲ ಎಂದು ಸಾರುತ್ತದೆ.    
    
ಭಾರತದ ಸಂವಿಧಾನದಲ್ಲಿ ತಿಳಿಸಿರುವಂತೆ ಭಾರತದಲ್ಲಿ ಹುಟ್ಟಿರುವ, ವಾಸಿಸುತ್ತಿರುವ, ವಲಸೆ ಬಂದಿರುವ ಹಾಗೂ ಅನಿವಾಸಿಗಳಾಗಿರುವ ಎಲ್ಲರೂ ಸಹ ಭಾರತದ ಪೌರರಾಗಿರುತ್ತಾರೆ. ಸಂವಿಧಾನವು ಅಂತಹ ನಾಗರೀಕರಿಗೆ ಭಧ್ರತೆ, ಮತ ಚಲಾಯಿಸುವ, ಚುನಾವಣೆಯಲ್ಲಿ ಭಾಗವಹಿಸುವ ಹಾಗೂ ಸರ್ಕಾರದಲ್ಲಿ ಭಾಗವಹಿಸುವ ಹಕ್ಕುಗಳಲ್ಲದೇ, ಮೂಲಭೂತ ಹಕ್ಕುಗಳು, ಆಸ್ಥಿ ಹಕ್ಕು, ವ್ಯವಹಾರ ನಡೆಸುವ ಹಕ್ಕುಗಳಲ್ಲದೇ ಇನ್ನೂ ಮುಂತಾದ ಹಲವಾರು ಹಕ್ಕುಗಳನ್ನು ನೀಡುವ ಮೂಲಕ ಭಾರತದ ಪೌರನಿಗೆ ಹಲವಾರು ಸವಲತ್ತುಗಳನ್ನು ಒದಗಿಸುತ್ತದೆ.

ಪೌರತ್ವ ಕಾಯ್ದೆ 1955 ಹಾಗೂ ಪೌರತ್ವ ತಿದ್ದುಪಡಿ ಕಾಯ್ದೆ 2019 ವೈರುದ್ಯಗಳು
ಸ್ವತಂತ್ರ ಭಾರತದ ಸಂವಿಧಾನದಲ್ಲಿ ವಿವರಿಸಲಾದ ಪೌರತ್ವದ ಹಕ್ಕು ಸಂವಿಧಾನದ ಜಾರಿಯ ಸಂದರ್ಭದಲ್ಲಿನ ಪೌರತ್ವದ ಬಗ್ಗೆ ವಿವರಿಸಿದರೆ, 1955 ಪೌರತ್ವ ಕಾಯ್ದೆಯು ಸಂವಿಧಾನದ ಜಾರಿಯ ನಂತರದ ಪೌರತ್ವದ ಹಕ್ಕಿನ ಬಗ್ಗೆ ವಿವರಿಸುತ್ತದೆ. ಸದರಿ ಕಾಯ್ದೆಯನ್ನು ಸಂವಿದಾನದ 11 ಅನುಚ್ಚೇಧದಡಿಯಲ್ಲಿ ಕೇಂದ್ರ ಸರ್ಕಾರಕ್ಕೆ ನೀಡಲಾಗಿರುವ ವಿಶೇಷಾಧಿಕಾರ ಬಳಸಿ ಪೌರತ್ವವನ್ನು ಅನುಷ್ಠಾನಕ್ಕೆ ತರುವ ಉದ್ದೇಶದಿಂದ 30ನೇ ಡಿಸೆಂಬರ್ 1955ರಂದು ಜಾರಿಗೆ ತರಲಾಯಿತು.

1955 ಪೌರತ್ವ ಕಾಯ್ದೆಯ ಪ್ರಕಾರ ಕೆಳಕಂಡಂತೆ ಪೌರತ್ವವನ್ನು ಪಡೆಯಬಹುದಾಗಿದೆ (2004 ತಿದ್ದುಪಡಿಯಂತೆ);
1.  ಹುಟ್ಟಿನಿಂದ ಪೌರತ್ವ: 3ನೇ ಡಿಸೆಂಬರ್ 2004 ರಂದು ಅಥವಾ ನಂತರದಲ್ಲಿ ಹುಟ್ಟಿದ ವ್ಯಕ್ತಿಯ  ತಂದೆ ಹಾಗೂ ತಾಯಿ ಇಬ್ಬರೂ ಭಾರತದ ನಿವಾಸಿಗಳಾಗಿದ್ದರೆ ಅಥವಾ ಪಿತೃಗಳಲ್ಲಿ ಯಾರಾದರೊಬ್ಬರು ಭಾರತದ ನಿವಾಸಿಯಾಗಿದ್ದು ಅದರೆ ಮತ್ತೊಬ್ಬರು ಜನನದ ಕಾಲದಲ್ಲಿ ಅಕ್ರಮ ವಲಸಿಗರಾಗಿರದಿದ್ದರೆ;
2.  ಸಭ್ಯತೆಯ ಆಧಾರದಲ್ಲಿ ಪೌರತ್ವ : 1992 ರವರೆವಿಗೂ, ಯಾವ ವ್ಯಕ್ತಿ ಭಾರತದ ಹೊರಗೆ ಜನಿಸಿರುತ್ತಾನೆಯೋ ಮತ್ತು ಭಾರತದ ತಂದೆಯನ್ನು ಹೊಂದಿದ್ದರೆ, ಅಂತಹವರು ಭಾರತದ ಪೌರತ್ವ ಪಡೆಯಲು ಬಾದ್ಯರಾಗಿರುತ್ತಾರೆ. ಹಾಗಿದ್ದಾಗ್ಯೂ ಆತ/ಆಕೆ ಡಿಸೆಂಬರ್ 2004 ನಂತರದಲ್ಲಿ ಜನಿಸಿದ್ದು, ಜನಿಸಿದ 1 ವರ್ಷದೊಳಗೆ ಜನನ ನೊಂದಣಿಯಾಗಿದ್ದರೆ ಅಂತಹವರನ್ನೂ ಭಾರತದ ನಾಗರೀಕ ಎಂದು ಪರಿಗಣಿಸಲಾಗುತ್ತದೆ.
3.  ನೊಂದಣಿಯಂತೆ ಪೌರತ್ವ : ಕೆಲವು ನಿಯಮಾವಳಿ ಹಾಗೂ ನಿಂತ್ರಣಕ್ಕೆ ಒಳಪಟ್ಟು, ಭಾರತದ ಸಂಜಾತನಾದ ವ್ಯಕ್ತಿ ಅಥವಾ ಮಹಿಳೆ ಭಾರತದ ನಾಗರೀಕನ್ನು ವಿವಾಹವಾಗಿದ್ದರೆ ಅಂತಹವರು ಭಾರತದ ನಾಗರೀಕರು ಎಂದು ನೊಂದಣಿ ಮಾಡಿಕೊಳ್ಳಬಹುದಾಗಿದೆ.
4.   ಸ್ವಾಭಾವಿಕತೆಯ ಆಧಾರದಲ್ಲಿ ಪೌರತ್ವ : ಯಾವ ವಿದೇಶಿ ಪ್ರಜೆ ನೊಂದಣಿ ಮಾಡಿದ ತನ್ನ ಕೊನೆಯ 12 ತಿಂಗಳು ಹಾಗೂ 14 ವರ್ಷಗಳಲ್ಲಿ ಮೊದಲ 11 ವರ್ಷಗಳ ಕಾಲಕ್ಕೆ ಭಾರತದ ನಿವಾಸಿ ಅಥವಾ ಭಾರತ ಸರ್ಕಾರದ ಸೇವೆಯಲ್ಲಿದ್ದರೆ ಸ್ವಾಭಾವಿಕವಾಗಿ ಪೌರತ್ವ ಪಡೆಯಬಹುದಾಗಿದೆ.
5.   ಭೂಭಾಗದಿಂದ ಪೌರತ್ವ : ಯಾವುದೇ ಹೊಸ ಭೂಭಾಗ ಭಾರತದ ಭಾಗವಾದ ಪಕ್ಷದಲ್ಲಿ ಅಂತಹ ಪ್ರದೇಶದ ವ್ಯಕ್ತಿ ಕೂಡ ಭಾರತದ ನಾಗರೀಕ ಎಂಬುದಾಗಿ ಕೇಂದ್ರ ಸರ್ಕಾರ ನಿರ್ಧರಿಸುತ್ತದೆ.


ಮೂಲ ಕಾಯ್ದೆಯ ಕಲಂ 2 ರಡಿಯಲ್ಲಿ ಅಕ್ರಮ ವಲಸಿಗರು ಎಂಬುದಕ್ಕೆ ಸ್ಪಷ್ಟವಾದ ವಿವರಣೆಯನ್ನು ನೀಡಲಾಗಿರುತ್ತದೆ. ಯಾವ ವಿದೇಶಿ ಪ್ರಜೆಯು ಯಾವುದೇ ಕಾನೂನುಬದ್ದ ದಾಖಲಾತಿಗಳಿಲ್ಲದೇ ಅಥವಾ ಭಾರತ ಪ್ರವೇಶಿಸಲು ಅಗತ್ಯವಾಗಿರುವಾ ಪಾಸ್ ಪೋರ್ಟ ಹಾಗೂ ಪ್ರಯಾಣದ ದಾಖಲಾತಿಗಳಿಲ್ಲದೇ ಅಥವಾ ಭಾರತದ ಕಾನೂನುಗಳಿಗೆ ವಿರುದ್ದವಾಗಿ ಭಾರತವನ್ನು ಭೂಭಾಗವನ್ನು ಪ್ರವೇಶಿಸುತ್ತಾನೋ ಹಾಗೂ ಪಾಸ್ ಪೋರ್ಟ ಹಾಗೂ ಪ್ರಯಾಣದ ದಾಖಲಾತಿಗಳಿದ್ದು ಭಾರತದ ಭೂಭಾಗದಲ್ಲಿ ಸಂಚರಿಸಲು ನೀಡಿದ ಅವಕಾಶ ಮುಗಿದಿದ್ದು ಭಾರತದಿಂದ ಹೊರಹೋಗಿಲ್ಲವಾದರೆ ಅಂತಹ ವ್ಯಕ್ತಿಗಳನ್ನು ಅಕ್ರಮ ವಲಸಿಗರಾಗಿರುತ್ತಾರೆ.

ಆದರೆ ಅಕ್ರಮ ವಲಸಿಗರನ್ನು ಮೂಲ ಕಾಯಿದೆಯಲ್ಲಿ ಯಾವುದೇ ಧಾರ್ಮಿಕ ಹಿನ್ನೆಲೆಯಿಂದಾಗಲೀ ಅಥವಾ ಧರ್ಮದಿಂದಾಗಲೀ ಗುರುತಿಸುವುದಿಲ್ಲ ಹಾಗೂ ವಿದೇಶಿ ಎಂಬ ಪದ ಬಳಕೆಯಲ್ಲಿ ಯಾವುದೇ ದೇಶಗಳನ್ನು ಗುರಿಯಾಗಿರಿಸಿರುವುದಿಲ್ಲ. ಕಾನೂನಿನಲ್ಲಿ ಎಲ್ಲರೂ ಸಮಾನರು ಎಂಬ ತತ್ವವನ್ನು ಅಕ್ರಮ ವಲಸಿಗರು ಯಾರು ಎಂಬುದನ್ನು ನಿರ್ಧರಿಸುವಲ್ಲಿ ನಾವು ಕಾಣಬಹುದಾಗಿರುತ್ತದೆ. ಅದರೆ ಇತ್ತೀಚಿಗೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ 2019ರಲ್ಲಿ ಮೂಲ ಪೌರತ್ವ ಕಾಯ್ದೆಯ ಕಲಂ 2ಕ್ಕೆ ಬದಲಾವಣೆ ತರಲಾಗಿರುತ್ತದೆ. ಸದರಿ ಕಾಯ್ದೆಯಂತೆಆಫ್ಘಾನಿಸ್ಥಾನ, ಬಾಂಗ್ಲಾದೇಶ ಹಾಗೂ ಪಾಕಿಸ್ಥಾನಕ್ಕೆ ಸೇರಿದ ಹಿಂಧೂ, ಸಿಖ್ ಬೌದ್ದ, ಜೈನ, ಪಾರ್ಸಿ ಹಾಗೂ ಕ್ರಿಶ್ಚಿಯನ್ ಸಮೂದಾಯಕ್ಕೆ ಸೇರಿದವರು ಕೇಂದ್ರ ಸರ್ಕಾದ ನಿಮಯಗಳಿಗೆ, ಪಾಸ್ ಪೋರ್ಟ್ ಕಾಯ್ದೆ 1920, ಕಲಂ3 (2) ಪೌರತ್ವ ಕಾಯ್ದೆ 1955 ಅಥವಾ ವಿದೇಶಿಗರ ಕಾಯ್ದೆ 1956 ನಿಯಮಾವಳಿಗೆ ವಿರುದ್ದವಾಗಿದ್ದರೂ ಕೂಡ ಅವರನ್ನು ಅಕ್ರಮ ವಲಸಿಗರೆಂದು ಭಾವಿಸಬಾರದು ಹಾಗೂ 2019 ತಿದ್ದುಪಡಿ ಕಾಯ್ದೆಯು ಜಾರಿಗೊಂಡ ದಿವಸದಿಂದ ಮೇಲೆ ತಿಳಿಸಲಾದ ಸಮೂದಾಯಕ್ಕೆ ಸೇರಿದ ವಲಸಿಗರು ಭಾರತೀಯ ನಾಗರೀಕರೆಂದು ಪೌರತ್ವ ಕಾಯ್ದೆಯ ಕಲಂ 6ರಡಿಯಲ್ಲಿ ಘೋಷಿಸಿಕೊಳ್ಳಬಹುದು ಎಂಬುದಾಗಿದೆ.

ಮೂಲತಃವಾಗಿ 2019 ತಿದ್ದುಪಡಿ ಕಾಯ್ದೆಯು ಮೂಲ ಕಾಯ್ದೆಯ ವಿಸ್ತಾರಕ್ಕೆ ಮಿತಿಯನ್ನು ಹೇರುತ್ತದೆ. ಮೂಲ ಕಾಯ್ದೆಯಲ್ಲಿ ಭಾರತಕ್ಕೆ ಕಾನೂನಿಗೆ ವಿರುದ್ದವಾಗಿ ಹಾಗೂ ಸಮರ್ಪಕವಾದ ದಾಖಲಾತಿಗಳಿಲ್ಲದೇ ಬರುವ ಜನರನ್ನು ಎಲ್ಲಾ ಧರ್ಮದ, ಎಲ್ಲಾ ದೇಶದ ವಾಸಿಗಳನ್ನೂ ಅಕ್ರಮ ವಲಸಿಗರು ಎಂದು ತೀರ್ಮಾನಿಸುತ್ತದೆ. ಆದರೆ ತಿದ್ದುಪಡಿ ಕಾಯ್ದೆಯು ಕೇವಲ ಮೂರು ರಾಷ್ಟ್ರಗಳಿಂದ ಬಂದಿರಬಹುದಾದ ಆರು ಸಮೂದಾಯದ ಜನರಿಗೆ ಮಾತ್ರ ಅಕ್ರಮ ವಲಸಿಗರಲ್ಲ ಎಂಬ ಪಟ್ಟಿಯನ್ನು ನೀಡುತ್ತದೆ. ಭಾರತದ ಸಂವಿಧಾನದ ಮೂಲ ಆಶಯವಾದ ಭಾರತದ ನಾಗರೀಕರನ್ನು ಯಾವುದೇ ಜಾತಿ, ಧರ್ಮ, ಲಿಂಗದ ಆಧಾರದಲ್ಲಿ ವಿಂಗಡಿಸಬಾರದು ಎಂಬುದರ ಕಲ್ಪನೆಗೆ ವಿರುದ್ದವಾದುದಾಗಿರುತ್ತದೆ. ಅಲ್ಲದೇ ತಿದ್ದುಪಡಿ ಕಾಯ್ದೆಯಲ್ಲಿ ವಿದೇಶದಿಂದ ಭಾರತಕ್ಕೆ ವಲಸೆ ಬಂದಿರಬಹುದಾದ ಮುಸ್ಲಿಮರನ್ನು, ಶ್ರೀಲಂಕಾದಿಂದ ಬಂದಿರಬಹುದಾದ ತಮಿಳಿಗರನ್ನು, ಮಯನ್ಮಾರ್ ನಿಂದ ಬಂದಿರುವ ರೋಹಿಂಗ್ಯಾ ಅಕ್ರಮ ವಲಸಿಗರನ್ನು ಕಡೆಗಣಿಸಲಾಗಿದೆ. ಕೇಂದ್ರ ಸರ್ಕಾರದ ನಡೆ ಸಂವಿಧಾನ ವಿರೋಧಿ ದೋರಣೆಯಿಂದ ಕೂಡಿರುತ್ತದೆ ಹಾಗೂ ಮೂಲ ಪೌರತ್ವ ಕಾಯ್ದೆಯ ಆಶಯಕ್ಕೆ ಮಿತಿಯನ್ನೊಡ್ಡುತ್ತದೆ. ಹಾಗೂ ಧರ್ಮದ ಹಿನ್ನೆಲೆಯಲ್ಲಿ ಯಾರು ಭಾರತದ ಪೌರರಾಗಬಹುದು ಎಂಬುದನ್ನು ನಿರ್ಧರಿಸುತ್ತದೆ.

2019 ಪೌರತ್ವ ತಿದ್ದುಪಡಿ ಕಾಯ್ದೆಯ ಕಲಂ 2 ಕ್ಕೆ ಬದಲಾವಣೆ ತಂದಿರುವಂತೆಯೇ ಕೇಂದ್ರ ಸರ್ಕಾರ ಮೂಲ ಪೌರತ್ವ ಕಾಯ್ದೆಯ ಮೂರನೇ ಷೆಡ್ಯೂಲಿಗೂ ಸಹ ಬದಲಾವಣೆಯನ್ನು ತಂದಿದೆ. 1955 ಪೌರತ್ವ ಕಾಯ್ದೆಯ ಷೆಡ್ಯೂಲ್ 3 ರಲ್ಲಿ ಸ್ವಾಭಾವಿಕವಾಗಿ ಭಾರತದ ಪೌರತ್ವವನ್ನು ಹೇಗೆ ಪಡೆಯಬಹುದು ಎಂಬುದನ್ನು ವಿವರಿಸುತ್ತದೆ ಅದರಲ್ಲಿ ವಿವರಿಸಿದಂತೆ ಯಾರು ಬೇರೆ ದೇಶದ ಪೌರರಾಗಿರುವುದಿಲ್ಲವೋ ಅಥವಾ ಭಾರತದ ಕಾನೂನಿನ ಮೂಲಕ ಅವರ ದೇಶದ ಪೌರತ್ವವನ್ನು  ಕಳೆದುಕೊಂಡಿದ್ದಲ್ಲಿ, ಯಾರು ಒಂದು ನಿರ್ದಿಷ್ಟ ದೇಶದ ಪೌರನಾಗಿದ್ದು, ಭಾರತದ ಪೌರತ್ವ ಲಭ್ಯವಾದ ಕೂಡಲೇ ಆತನ ದೇಶದ ಪೌರತ್ವವನ್ನು ಬಿಟ್ಟುಕೊಡಲು ಒಪ್ಪಿರುತ್ತಾನೋ, ಭಾರತದ ಪೌರತ್ವಕ್ಕೆ ಅರ್ಜಿ ಸಲ್ಲಿಸಿದ 12 ತಿಂಗಳಿಗೆ ಮುಂಚಿತವಾಗಿ ಯಾರು ಭಾರತದ ನಿವಾಸಿಯಾಗಿರುತ್ತಾನೋ ಅಥವಾ ಭಾರತ ಸರ್ಕಾರದ ಸೇವೆಯಲ್ಲಿರುತ್ತಾನೋ, ಅರ್ಜಿ ಸಲ್ಲಿಸಿದ 12 ತಿಂಗಳ ನಂತರ ಕನಿಷ್ಟ 11 ವರ್ಷಕ್ಕೆ ಕಡಿಮೆಯಿಲ್ಲದಂತೆ ಯಾರು ಭಾರತದ ನಿವಾಸಿಯಾಗಿರುತ್ತಾನೋ ಅಥವಾ ಭಾರತ ಸರ್ಕಾರದ ಸೇವೆಯಲ್ಲಿರುತ್ತಾನೋ, ಒಳ್ಳೆಯ ಗುಣ ಹೊಂದಿರುತ್ತನೋ, ಭಾರತದ ಸಂವಿಧಾನದ ಷೆಡ್ಯೂಲಿನಲ್ಲಿ ವಿವರಿಸಲಾದ ಭಾಷೆಗಳ ಬಗ್ಗೆ ತಿಳುವಳಿಕೆಯಿರುವವರಿಗೆ ಸ್ವಾಭಾವಿಕವಾಗಿ ಪೌರತ್ವವನ್ನು ನೀಡಲಾಗುತ್ತದೆ. ಸದರಿ ಷೆಡ್ಯೂಲಿನಂತೆ ಯಾರು 11 ವರ್ಷಗಳಿಗೆ ಕಡಿಮೆಯಿಲ್ಲದಂತೆ ಭಾರತದ ನಿವಾಸಿಯಾಗಿದ್ದರೇ ಅಥವಾ ಭಾರತ ಸರ್ಕಾರದ ಸೇವೆಯಲ್ಲಿದ್ದರೆ ಅಂತಹವರಿಗೆ ಪೌರತ್ವ ಕಾಯ್ದೆಯ 3ನೇ ಷೆಡ್ಯೂಲಿನಂತೆ ಪೌರತ್ವವನ್ನು ನೀಡಬಹುದಾಗಿರುತ್ತದೆ. ಆದರೆ ಕೇಂದ್ರ ಸರ್ಕಾರ 2019 ತಿದ್ದುಪಡಿ ಕಾಯ್ದೆಯಂತೆಆಫ್ಘಾನಿಸ್ಥಾನ, ಬಾಂಗ್ಲಾದೇಶ ಹಾಗೂ ಪಾಕಿಸ್ಥಾನಕ್ಕೆ ಸೇರಿದ ಹಿಂಧೂ, ಸಿಖ್ ಬೌದ್ದ, ಜೈನ, ಪಾರ್ಸಿ ಹಾಗೂ ಕ್ರಿಶ್ಚಿಯನ್ ಸಮೂದಾಯಕ್ಕೆ ಸೇರಿದವರು ಯಾರು ಕನಿಷ್ಟ ಆರು ವರ್ಷಗಳಿಗೆ ಕಡಿಮೆಯಾಗದಂತೆ ಭಾರತದ ನಿವಾಸಿಯಾಗಿರುತ್ತಾರೋ ಅಥವಾ ಭಾರತ ಸರ್ಕಾರದ ಸೇವೆಯಲ್ಲಿರುತ್ತಾರೋ ಅಂತಹ ವ್ಯಕ್ತಿಗಳು ಪೌರತ್ವ ಕಾಯ್ದೆಯ ಮೂರನೇ ಷೆಡ್ಯೂಲಿನಂತೆ ಪೌರತ್ವನ್ನು ಪಡೆಯಬಹುದಾಗಿದೆ

2019 ಪೌರತ್ವ ತಿದ್ದುಪಡಿ ಕಾಯ್ದೆಯ ಪ್ರಕಾರಆಫ್ಘಾನಿಸ್ಥಾನ, ಬಾಂಗ್ಲಾದೇಶ ಹಾಗೂ ಪಾಕಿಸ್ಥಾನಕ್ಕೆ ಸೇರಿದ ಹಿಂಧೂ, ಸಿಖ್ ಬೌದ್ದ, ಜೈನ, ಪಾರ್ಸಿ ಹಾಗೂ ಕ್ರಿಶ್ಚಿಯನ್ ಸಮೂದಾಯರಿಗೆ ಸಂಬಂಧಿಸಿದಂತೆ ಮೂಲ ಷೆಡ್ಯೂಲ್ ನಲ್ಲಿ ವಿವರಿಸಿರುವ 11 ವರ್ಷಗಳಿಗೆ ಬದಲಾಗಿ 6 ವರ್ಷಗಳ ಗಡಿಯನ್ನು ನಿಗಧಿಪಡಿಸಲಾಗಿದೆ. ಕೇಂದ್ರ ಸರ್ಕಾರದ ನಡೆಯೂ ಕೂಡ ಸಂವಿಧಾನದ ಆಶಯಗಳಿಗೆ ವಿರುದ್ದವಾಗಿರುತ್ತದೆ. ಆಫ್ಘಾನಿಸ್ಥಾನ, ಬಾಂಗ್ಲಾದೇಶ ಹಾಗೂ ಪಾಕಿಸ್ಥಾನಕ್ಕೆ ಸೇರಿದ ಹಿಂಧೂ, ಸಿಖ್ ಬೌದ್ದ, ಜೈನ, ಪಾರ್ಸಿ ಹಾಗೂ ಕ್ರಿಶ್ಚಿಯನ್ ಸಮೂದಾಯರಿಗೆ ಕೇವಲ 6 ವರ್ಷಗಳಿಗೆ ಸಿಗುವ ಪೌರತ್ವವು ಮೇಲ್ಕಂಡ ಸಮೂದಾಯಗಳನ್ನು ಹೊರತು ಪಡಿಸಿ ಬೇರೆ ಸಮೂದಾಯ, ಧರ್ಮಕೆ ಸೇರಿದವರು 11 ವರ್ಷಗಳು ಕಾಯಬೇಕಾಗುತ್ತದೆ. ತಿದ್ದುಪಡಿಯು ಸಂವಿಧಾನದ ಅನುಚ್ಚೇಧ 14 ರಲ್ಲಿ ವಿವರಸಿಲಾದ ಸಮಾನ ತತ್ವ ಹಾಗೂ ಸಮಾನ ರಕ್ಷಣೆಗೆ ವಿರುದ್ದವಾಗಿರುತ್ತದೆ. ಹೇಗೆಂದರೆ, ತಿದ್ದುಪಡಿ ಕಾಯ್ದೆಯು ಭಾರತದ ಪೌರತ್ವವನ್ನು ಧರ್ಮದ ಆಧಾರದಲ್ಲಿ ನೀಡುತ್ತದೆ. ಅಲ್ಲದೇ ಮೂರು ದೇಶಗಳ ಆರು ಧರ್ಮೀಯರಿಗೆ ಮಾತ್ರ ಪೌರತ್ವವನ್ನು ನೀಡುವಲ್ಲಿನ ಸಕಾರಣಗಳನ್ನು ಸ್ಪಷ್ಟಪಡಿಸುವುದಿಲ್ಲ. ಭಾರತದ ಸಂವಿಧಾನದ ಮೂಲ ಆಶಯವಾದ ಭಾರತವು ಜಾತ್ಯಾತೀತ ರಾಷ್ಟ್ರ ಎಂಬುದಕ್ಕೆ ವಿರುದ್ದವಾಗಿರುತ್ತದೆ. ಒಟ್ಟಾರೆಯಾಗಿ ಹೇಳುವುದಾದರೆ ಕೇಂದ್ರ ಸರ್ಕಾರದ 2019 ಪೌರತ್ವ ತಿದ್ದುಪಡಿ ಕಾಯ್ದೆಯು ಅಸಂವಿಧಾನಿಕವಾಗಿರುತ್ತದೆ.

ರಾಷ್ಟ್ರೀಯ ನಾಗರೀಕ ನೊಂದಣಿ(ಎನ್.ಆರ್.ಸಿ) ಹಾಗೂ ರಾಷ್ಟ್ರೀಯ ಜನಸಂಖ್ಯಾ ನೊಂದಣಿ (ಎನ್.ಪಿ.ಆರ್.):
ಕೇಂದ್ರ ಸರ್ಕಾರ ಪೌರತ್ವ ಕಾಯಿದೆಗೆ ತಂದಿರುವ 2019 ತಿದ್ದುಪಡಿಯ ಜೊತೆ ಜೊತೆಗೇ ಕೇಳಿಬರುತ್ತಿರುವುದು ಎನ್.ಆರ್.ಸಿ ಹಾಗೂ ಎನ್.ಪಿ.ಆರ್. ಎನ್.ಆರ್.ಪಿ ಹಾಗೂ ಎನ್.ಪಿ.ಆರ್. ಬಗ್ಗೆ ತಿಳಿದುಕೊಳ್ಳದೇ ಅಥವಾ ಎರಡನ್ನೂ ಪೌರತ್ವ ತಿದ್ದುಪಡಿ ಕಾಯ್ದೆ 2019 ಜೊತೆಯಲ್ಲಿಟ್ಟು ನೋಡದೇ ಹೋದರೆ ಪೌರತ್ವ ತಿದ್ದುಪಡಿ ಕಾಯ್ದೆ ಉಂಟು ಮಾಡಲಿರುವ ಪರಿಣಾಮವನ್ನು ಅರಿಯಲು ಸಾಧ್ಯವಾಗುವುದಿಲ್ಲ.

ಏನಿದು ಎನ್.ಆರ್.ಸಿ.? ರಾಷ್ಟ್ರೀಯ ನಾಗರೀಕ ನೊಂದಣಿಯ ಪರಿಕಲ್ಪನೆ ಹುಟ್ಟಿದ್ದೇ ಅಸ್ಸಾಂನಲ್ಲಿ. ಭಾರತದಲ್ಲಿ ಪೌರತ್ವ ನೀಡುವಿಕೆಯ ಸಂಬಂಧವಾಗಿ ಪೌರತ್ವ ಕಾಯ್ದೆ 1955 ಜಾರಿಯಲ್ಲಿದ್ದರೂ ಸಹ ಪ್ರತ್ಯೇಕ ಎನ್.ಆರ್.ಸಿಯ ಅಗತ್ಯವೇನಿತ್ತು? ಇದನ್ನು ಅರಿಯಬೇಕಾದರೆ ನಾವು ಇತಿಹಾಸದ ಕಡೆ ಮುಖಮಾಡಬೇಕಾಗುತ್ತದೆ. ಬ್ರಿಟೀಷರ ಆಳ್ವಿಕೆಯ ಸಂದರ್ಭದಲ್ಲಿ ಅಸ್ಸಾಂ ಬೆಂಗಾಲ್ ಪ್ರಾಂತ್ಯಕ್ಕೆ ಸೇರಿತ್ತು. ಬ್ರಿಟೀಷರು 1826 ರಿಂದ 1947ರವರೆವಿಗೂ ಅಸ್ಸಾಮಿನ ಟೀ ತೋಟಗಳಲ್ಲಿ ಕಡಿಮೆ ಕೂಲಿಗೆ ಕೆಲಸ ಮಾಡಲು ಕೂಲಿಯಾಳುಗಳನ್ನು ವಲಸೆ ಮಾಡಿಸಿರುತ್ತಾರೆ. ಹಾಗೆಯೇ ಸ್ವಾತಂತ್ರ್ಯದ ನಂತರ ಎರಡು ಮುಖ್ಯ ವಲಸೆಗಳಾಗುತ್ತವೆ. ಮೊದಲನೆಯದು ಪಾಕಿಸ್ಥಾನ ಹಾಗೂ ಭಾರತ ವಿಭಜನೆಯಾದಾಗ ಅಂದಿನ ಪೂರ್ವ ಪಾಕಿಸ್ಥಾನದಿಂದ ಅಂದರೆ ಇಂದಿನ ಬಾಂಗ್ಲಾದೇಶದಿಂದ ಲಕ್ಷಾಂತರ ಸಂಖ್ಯೆಯಲ್ಲಿ ಜನರು ಅಸ್ಸಾಂಗೆ ವಲಸೆ ಬರುತ್ತಾರೆ ಹಾಗೂ ಎರಡನೆಯದಾಗಿ 1971ರಲ್ಲಿ ಬಾಂಗ್ಲಾ ಪಾಕಿಸ್ಥಾನದಿಂದ ಸ್ವತಂತ್ರವಾದಾಗಲೂ ಸಹ ಲಕ್ಷಾಂತರ ಸಂಖ್ಯೆಯಲ್ಲಿ ಜನರು ಅಸ್ಸಾಂಗೆ ವಲಸೆ ಬರುತ್ತಾರೆ. ಸಂದರ್ಭದಲ್ಲಿ ಮೂಲ ಅಸ್ಸಾಮಿಗರು ಅಕ್ರಮವಾಗಿ ವಲಸೆ ಬಂದಂತಹವರಿಗೆ ಭಾರತದ ಪೌರತ್ವ ನೀಡುವುದನ್ನು ಪ್ರಶ್ನಿಸಿದ್ದಲ್ಲದೇ, ಅಸ್ಸಾಂ ವಿಧ್ಯಾರ್ಥಿ ಸಂಘಟನೆಗಳ ಒಕ್ಕೂಟವು 1979-85ರವರೆವಿಗೂ ಹೋರಾಟ ನಡೆಸಿ ಅಕ್ರಮ ವಲಸಿಗರನ್ನು ಗುರುತಿಸಿ, ಅವರನ್ನು ಅಸ್ಸಾಮಿನಿಂದ ಹೊರಹಾಕುವಂತೆ ಕೇಂದ್ರ ಸರ್ಕಾರದ ಮುಂದೆ ಒತ್ತಡವನ್ನು ತರುತ್ತಾರೆ. ಅಲ್ಲದೇ ಭಾರತದ ಸುಪ್ರೀಂ ಕೋರ್ಟಿನ ಮುಂದೆ ಸಾರ್ವಜನಿಕ ಹಿತಾಸಕ್ತಿ ದಾವೆಗಳನ್ನು ಹೂಡಿ ಅಕ್ರಮ ವಲಸಿಗರಿಗೆ ಪೌರತ್ವ ನೀಡುವುದನ್ನು ಪ್ರಶ್ನಿಸಲಾಗುತ್ತದೆ. 1979 ರಿಂದ 1985ರವರೆವಿಗೆ ನಡೆದ ವಿಧ್ಯಾರ್ಥಿ ಸಂಘಟನೆಯ ಒಕ್ಕೂಟವು ಹೋರಾಟದಿಂದಾಗಿ ಅವರೊಂದಿಗೆ ಅಂದಿನ ಕೇಂದ್ರ ಸರ್ಕಾರವು 1985 ಆಗಸ್ಟ್ 15 ರಂದು ಮಾಡಿಕೊಂಡ ಅಸ್ಸಾಂ ಒಪ್ಪಂದವನ್ನು ಮಾಡಿಕೊಳ್ಳಲಾಗುತ್ತದೆ. ಹಾಗೂ ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಅಸ್ಸಾಂನಲ್ಲಿರುವ ಅಕ್ರಮ ಮತದಾರರನ್ನು ಪೌರತ್ವ ಕಾಯ್ದೆಯಡಿಯಲ್ಲಿ ರಾಷ್ಟ್ರೀಯ ನಾಗರೀಕ ನೊಂದಣಿಯ ಮೂಲಕ ಗುರುತಿಸಿ, ಮತದಾರ ಪಟ್ಟಿಯಿಂದ ಅಂತಹವರನ್ನು ತೆಗೆಯುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನವನ್ನು ನೀಡುತ್ತದೆ. ಹಾಗಾಗಿ 1985ರಲ್ಲಿ ಕೇಂದ್ರ ಸರ್ಕಾರ ಹಾಗೂ ವಿಧ್ಯಾರ್ಥಿ ಸಂಘಟನೆಗಳ ಒಕ್ಕೂಟಗಳ ನಡುವೆಯಾಗಿದ್ದ ಅಸ್ಸಾಂ ಒಪ್ಪಂಧದಂತೆ 1955 ಪೌರತ್ವ ಕಾಯ್ದೆಯನ್ನು ತಿದ್ದುಪಡಿ ಮಾಡಲಾಗುತ್ತದೆ. ಸದರಿ ತಿದ್ದುಪಡಿಯಂತೆ  1955 ಪೌರತ್ವ ಕಾಯ್ದೆಗೆ ಕಲಂ 6 ಅನ್ನು ಸೇರ್ಪಡಿಸಲಾಗುತ್ತದೆ. 1985 ಅಸ್ಸಾಂ ಒಪ್ಪಂದದಂತೆ ಕೆಳಕಂಡಂತೆ ಅಸ್ಸಾಂನಲ್ಲಿ ನೆಲೆಸಿರುವವರಿಗೆ ಪೌರತ್ವ ನೀಡಲಾಗುತ್ತದೆ.
1.            ಭಾರತದಲ್ಲಿ ಜನಿಸಿರುವ ಹಾಗೂ ಜನವರಿ 1, 1966ಕ್ಕೆ ಮೊದಲು ಬಾಂಗ್ಲಾದೇಶದಿಂದ ಅಸ್ಸಾಂ ಗೆ ವಲಸೆ ಬಂದಿರುವವರು
2.            ಜನವರಿ 1, 1966 ರಿಂದ ಮಾರ್ಚ್ 25 1971 ನಡುವೆ ಅಸ್ಸಾಂಗೆ ವಲಸೆ ಬಂದಿರುವವರೂ ಸಹ ಎನ್.ಆರ್.ಸಿಯಡಿಯಲ್ಲಿ ಅವರಾಗೆಯೇ ನೊಂದಣಿಮಾಡಿಕೊಂಡಿದ್ದು, 10 ವರ್ಷಗಳ ಕಾಲ ವಾಸಮಾಡಿರುವವರಿಗೆ
3.            ಮಾರ್ಚ್ 25, 1971 ನಂತರ ಅಸ್ಸಾಂಗೆ ವಲಸೆ ಬಂದಿರುವವರಿಗೆ ಪೌರತ್ವ ನಿರಾಕರಿಸಿ, ಅವರನ್ನು ಅಸ್ಸಾಂ ನಿಂದ ಹೊರಹಾಕುವುದು.


ಎನ್.ಆರ್.ಸಿ.ಯಂತೆಯೇ ಚರ್ಚೆಯಾಗುತ್ತಿರುವುದು ರಾಷ್ಟ್ರೀಯ ಜನಸಂಖ್ಯಾ ನೊಂದಣಿ (ಎನ್.ಪಿ.ಆರ್.). ಎನ್.ಪಿ.ಆರ್. ಎಂಬುದು ಭಾರತದಲ್ಲಿರುವ ಸಾಮಾನ್ಯ ನಿವಾಸಿಗಳ ನೊಂದಣಿಯಷ್ಟೆ. ನೊಂದಣಿಯು ಭಾರತದ ಪೌರತ್ವ ಕಾಯ್ದೆ 1955 ಹಾಗೂ ನಾಗರೀಕರ ನೊಂದಣಿ ಹಾಗೂ ರಾಷ್ಟ್ರೀಯ ಗುರುತಿನ ಚೀಟಿ ಹಂಚಿಕೆ ನಿಯಮ 2003ರಡಿಯಲ್ಲಿ ಗ್ರಾಮ, ನಗರ, ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಪಡೆದ ಮಾಹಿತಿಯನ್ನು ಒಳಗೊಂಡಿರುತ್ತದೆ. ಅಲ್ಲದೇ ಮಾಹಿತಿಯು ಯಾವ ವ್ಯಕ್ತಿ ಆರು ತಿಂಗಳ ಅವಧಿಯಲ್ಲಿ ಎಲ್ಲಿ ವಾಸವಾಗಿದ್ದ ಹಾಗೂ ಮುಂದಿನ ಆರು ತಿಂಗಳಿನಲ್ಲಿ ಎಲ್ಲಿ ವಾಸವಾಗಲು ಇಚ್ಚಿಸುತ್ತಾನೆ ಎಂಬುದರ ಸಮಗ್ರ ಮಾಹಿತಿಯನ್ನು ಒಳಗೊಂಡಿರುತ್ತದೆ. ಒಟ್ಟಾರೆ ದೇಶದ ಪ್ರತಿ ಪ್ರಜೆಯ ಚಲನವಲನಗಳನ್ನು ಎನ್.ಪಿ.ಆರ್. ದಾಖಲೆ ಮಾಡುತ್ತದೆ. ಮೊದಲಿಗೆ 2010 ರಲ್ಲಿ ರೀತಿಯ ಮಾಹಿತಿಯನ್ನು ಸಂಗ್ರಹಿಸಲಾಯಿತು ಹಾಗೂ ಎರಡನೆಯ ಬಾರಿಗೆ 2015ರಲ್ಲಿ ಸಂಗ್ರಹ ಮಾಡಲಾಗಿದೆ. ರೀತಿ ಸಂಗ್ರಹಿಸಿದ ಮಾಹಿತಿಯನ್ನು ಆಧಾರ್ ಮಾಹಿತಿಯೊಂದಿಗೆ ಹಂಚಿಕೊಳ್ಳಲಾಗಿದೆ. ಎನ್.ಪಿ.ಆರ್ ಗೆ ಮಾಹಿತಿಯನ್ನು ಜನಗಣತಿ ಇಲಾಖೆ ಮಾಡುತ್ತಿದೆ. ನೊಂದಣಿಯಡಿಯಲ್ಲಿ ಒಬ್ಬ ವ್ಯಕ್ತಿಯ ಎಲ್ಲಾ ಖಾಸಗಿ ಮಾಹಿತಿಯನ್ನು ಕಲೆಹಾಕಲು ಈಗಿನ ಕೇಂದ್ರ ಸರ್ಕಾರ ನಿರ್ಧರಿಸಿದ್ದು, 2020 ಜನಗಣತಿಯೊಂದಿಗೆ ಮಾಹಿತಿಯನ್ನು ಪಡೆಯಲು ತೀರ್ಮಾನಿಸಲಾಗಿದೆ. 


ಪೌರತ್ವ ತಿದ್ದುಪಡಿ ಕಾಯ್ದೆ 2019 ಹಾಗೂ ಎನ್.ಆರ್.ಸಿ, ಎನ್.ಪಿ.ಆರ್ ನಡುವಿನ ಗೊಂದಲಗಳು :
ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆ 2019 ಬೆಳಕಿಗೆ ಬಂದ ನಂತರ ಭಾರತದಲ್ಲಿ ನಿರಂತರ ಪ್ರತಿಭಟನೆಗಳು, ಕಾಯ್ದೆಯ ಸಮರ್ಥನೆಯ ನಾಟಕಗಳು ಹಾಗೂ ಅಸ್ಸಾಂನಲ್ಲಿನ ಜನರ ಹೋರಾಟ ನಡೆಯುತ್ತಲೇ ಇವೆ. ಸಾಮಾಜಿಕ ಜಾಲತಾಣಗಳಲ್ಲಿಯೂ ಸಹ ಒಂದು ರೀತಿಯ ಯುದ್ದದ ವಾತಾವರಣವಿದ್ದರೆ, ದೇಶದ್ಯಾದಂತ ಅಘೋಷಿತ ತುರ್ತು ಪರಿಸ್ಥಿತಿಯಿದೆ. ಪೌರತ್ವ ತಿದ್ದುಪಡಿಯ ಕಾಯ್ದೆ 2019 ಅನುಷ್ಠಾನದಿಂದ ದೇಶದ ಜನರಿಗೆ ಯಾವ ರೀತಿಯ ಪರಿಣಾಮ ಆಗುತ್ತೆ ಹೇಳಿ ಎಂಬುದು ಕಾಯ್ದೆ ಪರ ಇರುವವರು ಎತ್ತುತ್ತಿರುವ ಪ್ರಶ್ನೆ. ಕೇವಲ ಪೌರತ್ವ ತಿದ್ದುಪಡಿ ಕಾಯ್ದೆ 2019ನ್ನು ಮಾತ್ರ ಪರಿಗಣಿಸಿದರೆ ಮೇಲ್ನೋಟಕ್ಕೆ ಮುಸ್ಲಿಂ ವಲಸಿಗರನ್ನು ತಿದ್ದುಪಡಿಯಲ್ಲಿ ಹೊರಗಿಟ್ಟಿದ್ದಾರೆ ಎಂದೆನಿಸುತ್ತದೆ ಹಾಗೂ ದೇಶದ ನಿವಾಸಿ ಮುಸ್ಲಿಂರಿಗೆ ತೊಂದರೆ ಇಲ್ಲ ಎಂಬ ಕಾಯ್ದೆ ಪರ ಇರುವವರ ಹಸಿ ಸುಳ್ಳು ನಿಜವೆನಿಸದೇ ಇರದು. ಆದರೆ ಎನ್.ಆರ್.ಸಿ ಹಾಗೂ ಎನ್.ಪಿ.ಆರ್. ಇವೆರಡರ ಜೊತೆಯಾಗಿ ಪೌರತ್ವ ಕಾಯ್ದೆಯ ತಿದ್ದುಪಡಿ 2019ನ್ನು ಓದಿದಾಗ ಮಾತ್ರ ನಿಜವಾದ ತಾರತಮ್ಯ ಹಾಗೂ ಕೇಂದ್ರ ಸರ್ಕಾರದ ಹಿಡನ್ ಅಜೆಂಡಾ ತಿಳಿಯುವುದು.

ಮೊದಲಿಗೆ ಭಾರತದ ಇಂದಿನ ಗೃಹಮಂತ್ರಿಗಳು ಚುನಾವಣಾ ಸಮಯದಲ್ಲಿ ಭಾಷಣ ಮಾಡುವಾಗ ನೀಡಿರುವ ಹೇಳಿಕೆಯನ್ನು ಗಮನಿಸಬೇಕಾಗುತ್ತದೆ. ಮೊದಲಿಗೆ ಪೌರತ್ವ ಕಾಯ್ದೆ ಬರುತ್ತದೆ ಆನಂತರ ಎನ್.ಆರ್.ಸಿ ಬರುತ್ತದೆ. ಮೂಲಕ ಕೆಲವು ಸಮೂದಾಯದವರನ್ನು ದೇಶದಿಂದ ಹೊರಹಾಕುತ್ತೇವೆ ಎಂಬ ಮಾತನಾಡುತ್ತಾರೆ. ಅವರ ಚುನಾವಣಾ ಪ್ರಣಾಳಿಕೆಯಂತೆಯೇ ಪೌರತ್ವ ಕಾಯ್ದೆಯನ್ನು ತಿದ್ದುಪಡಿ ಮಾಡಿಯಾಗಿದೆ. ಇನ್ನುಳಿದಿರುವುದು ಎನ್.ಆರ್.ಸಿ. ಜಾರಿಗೆ ತರುವುದು ಮಾತ್ರ. ಈಗಿನ ಚಳುವಳಿ ತೀರ್ವಗೊಂಡಿರುವುದರಿಂದ ಎನ್.ಆರ್.ಸಿ. ಜಾರಿ ಮಾಡುವುದು ಕೇಂದ್ರ ಸರ್ಕಾರದ ಮುಂದಿಲ್ಲ ಎಂಬಿತ್ಯಾದಿ ಹೇಳಿಕೆ ನೀಡಿ ಚಳುವಳಿಯನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದ್ದಾರೆ. ಮಾತಿನ ಹಿಂದೆ ಮತ್ತೊಂದು ಕಾರಣವೂ ಇದೆ, ಅದೇನೆಂದರೆ ಎನ್.ಆರ್.ಸಿ ಯನ್ನು ಅಸ್ಸಾಮಿಗೆ ಸೀಮಿತವಾಗಿ ಮಾತ್ರ ಜಾರಿಗೆ ತರಲಾಗಿದೆ ಹಾಗೂ ಏಕಾಏಕಿ ದೇಶದಾದ್ಯಂತ ಅನ್ವಯ ಮಾಡಲು ಸಾಧ್ಯವಿಲ್ಲ. ಅದಕ್ಕೆ ಪೂರಕವಾದ ಮಾಹಿತಿಯ ಅಗತ್ಯವಿದೆ. ಹಾಗಾಗಿಯೇ 2020 ಜನವರಿಯಿಂದ ಸೆಪ್ಟಂಬರ್ ಅವಧಿಯಲ್ಲಿ ಎನ್.ಪಿ.ಆರ್ ಮೂಲಕ ಸಾಮಾನ್ಯ ನಿವಾಸಿಗಳಾರು, ಅಕ್ರಮ ವಲಸಿಗರಾರು ಎಂಬ ಮಾಹಿತಿಯನ್ನು ಕಲೆಹಾಕುವ ಪ್ರಯತ್ನದಲ್ಲಿದ್ದಾರೆ. ಮಾಹಿತಿಯ ಕ್ರೋಢೀಕರಣಕ್ಕೆ ಕಾಲಾವಕಾಶದ ಅಗತ್ಯವಿರುವುದರಿಂದ ಎನ್.ಆರ್.ಸಿಯ ಜಾರಿಯನ್ನು ಮುಂದೂಡಲಾಗುತ್ತಿದೆ.

ಹಲವರಿಗೆ ಒಂದು ಪ್ರಶ್ನೆಯೂ ಮೂಡಬಹುದು. ಎನ್.ಆರ್.ಸಿ ದೇಶದಾದ್ಯಂತ ಜಾರಿಗೆ ತಂದರೆ ಏನು ತೊಂದರೆ ಇದೆ, ಅವರು ಕೇಳುವ ದಾಖಲೆ ನೀಡಿದರೆ ಆಗಬಹುದಲ್ಲಾ ಅಂತ. ಆದರೆ ಅದು ಅಷ್ಟು ಸುಲಭವಾಗಿಲ್ಲ. ಅಸ್ಸಾಂನಲ್ಲಿ ಎನ್.ಆರ್.ಸಿ ನೊಂದಣಿಗೆ ನೀಡಬೇಕಿರುವ ದಾಖಲೆಗಳ ಕುರಿತು ನೋಡಬೇಕಾಗುತ್ತದೆ. ಅಸ್ಸಾಂ ಒಪ್ಪಂದದಂತೆ ಮಾರ್ಚ್ 25 1971 ನ್ನು ಎನ್.ಆರ್.ಸಿ ಗಡುವಾಗಿ ನಿರ್ಧರಿಸಲಾಗಿದೆ. ಅದಕ್ಕೆ ಕಾರಣವನ್ನೂ ಸಹ ಮೇಲೆ ವಿವರಿಸಲಾಗಿದೆ. ಹಾಗಾಗಿ ಅಸ್ಸಾಂನಲ್ಲಿ ಯಾರಾದರೂ ನಾಗರೀಕ ಎಂದು ನೊಂದಣಿ ಮಾಡಬೇಕಾದರೆ ಆತ 1971ಕ್ಕಿಂತ ಮೊದಲೇ ಭಾರತದಲ್ಲಿ ಜನಿಸಿದ್ದೇನೆ ಎಂದು ತೋರಿಸಲು ಆತನ ಜನನ ಪ್ರಮಾಣಪತ್ರ ನೀಡಬೇಕಾಗುತ್ತದೆ. ಒಂದು ವೇಳೆ ಆತನ ಜನನ ಪ್ರಮಾಣಪತ್ರ ಇಲ್ಲದೇ ಇದ್ದರೆ ಆತನ ತಾಯಿ ಅಥವಾ ತಂದೆ ಅಲ್ಲಿನ ನಿವಾಸಿಗಳು ಅಂತ ತೋರಿಸಲು 1951 ಮತದಾರರ ಪಟ್ಟಿಯನ್ನು ನೀಡಬೇಕಾಗುತ್ತದೆ. ಇದು ನಿಜಕ್ಕೂ ಸಾಧ್ಯವಿದೆಯಾ? ಭಾರತದಲ್ಲಿ ಎಷ್ಟೋ ಜನರ ಬಳಿ ಇದುವರೆವಿಗೂ ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್, ಪಡಿತರ ಚೀಟಿಯೇ ಇಲ್ಲ. ಅಲ್ಲದೇ ಭಾರತದ ಜನಸಂಖ್ಯೆಯ 60% ಜನರ ಬಳಿ ಯಾವುದೇ ಭೂಮಿಯೂ ಸಹ ಇಲ್ಲ. ಹೀಗಿರುವಾಗ ಅವರು ಕೇಳುವ ದಾಖಲೆಯನ್ನು ಒದಗಿಸುವುದಾದರೂ ಹೆಂಗೇ? ಹಾಗಾಗಿ ಪೌರತ್ವ ತಿದ್ದುಪಡಿ ಕಾಯ್ದೆ 2019 ಕೇವಲ ಮುಸ್ಲಿಮರನ್ನು ಗುರಿಯಾಗಿರಿಸಿರುವುದಲ್ಲ, ದೇಶದ ಎಲ್ಲಾ ಸಮೂದಾಯದ ಬಡವರು, ಆದಿವಾಸಿಗಳು, ಅಲೆಮಾರಿಗಳು, ದಲಿತರು, ಒಕ್ಕಲಿಗರು, ಲಿಂಗಾಯಿತರು ಇತ್ಯಾದಿ ಇತ್ಯಾದಿ. ಕಾರಣಕ್ಕಾಗಿಯೇ ನೀವೃತ್ತ ನ್ಯಾಯಮೂರ್ತಿಗಳಾದ ಸನ್ಮಾನ್ಯ ಶ್ರೀ. ನಾಗಮೋಹನ್ ದಾಸ್ ರವರು ಹೇಳಿದ್ದು, ಪೌರತ್ವ ತಿದ್ದುಪಡಿ ಕಾಯ್ದೆ 2019 ದೇಶದ ಮೂಲ ನಿವಾಸಿಗಳ ವಿರುದ್ದವಿದೆ ಎಂದು.


ಕೇಂದ್ರ ಸರ್ಕಾರ ಬಹಳ ಬುದ್ದಿವಂತಿಕೆಯಿಂದಲೇ ಪೌರತ್ವ ತಿದ್ದುಪಡಿ ಕಾಯ್ದೆ 2019 ನ್ನು ಜಾರಿಗೆ ತಂದಿದೆ. ಕಾಂಗ್ರೆಸ್ ಮತ ರಾಜಕಾರಣ ಮಾಡುತ್ತಿದೆ ಎಂದು ಹೇಳುತ್ತಲೇ ಅಸ್ಸಾಂನಲ್ಲಿ ಎನ್.ಆರ್.ಸಿ ಯಂತೆ 1971 ಗಡುವು ಇದ್ದರೂ ತಿದ್ದುಪಡಿ ಕಾಯ್ದೆಯಡಿ 2014ರವರೆಗಿನ ಅಕ್ರಮ ವಲಸಿಗರಿಗೆ ಪೌರತ್ವ ನೀಡುತ್ತಿದೆ.. ಇದು ಮತ ರಾಜಕಾರಣದೊಂದಿಗೆ, ದೇಶದ ಮೂಲನಿವಾಸಿಗಳು, ಅಲ್ಪ ಸಂಖ್ಯಾತರನ್ನು ಒಕ್ಕಲೆಬ್ಬಿಸುವ ಪ್ರಯತ್ನವಾಗಿದೆ. ಹಾಗಾಗಿ ಪೌರತ್ವ ತಿದ್ದುಪಡಿ ಕಾಯ್ದೆ 2019 ನ್ನು ಹಿಂಪಡೆಯುವಂತೆ ದೇಶದ ಎಲ್ಲಾ ನಾಗರೀಕರೂ ಜಾತಿ, ಧರ್ಮದ ಹಿತಾಸಕ್ತಿ ಬಿಟ್ಟು ಒಟ್ಟಾಗಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರದೇ ಹೋದ ಪಕ್ಷದಲ್ಲಿ ಮುಂದೊಂದು ದಿನ ನಮ್ಮ ನೆಲದಲ್ಲಿ ನಾವೇ ಅಕ್ರಮ ವಲಸಿಗರಾಗುತ್ತೇವೆ. 

                                                                                        - ದಯಾನಂದಗೌಡ ಹೆಚ್.ಎನ್



                                                                                        

No comments:

Post a Comment